ಜೈನ ಧರ್ಮದ ಮುಖ್ಯಾಂಶಗಳು
•
ಜೈನ
ಧರ್ಮದ ಮೊದಲ ತೀರ್ಥಂಕರ – ಆದಿನಾಥ (ವೃಷಭನಾಥ)
•
ಜೈನ
ಧರ್ಮದ 23ನೇ ತೀರ್ಥಂಕರ – ಪಾರ್ಶ್ವನಾಥ.
•
ಜೈನ
ಧರ್ಮದ 24ನೇ ತೀರ್ಥಂಕರ – ಮಹಾವೀರ.
•
ʻಜೈನ ಕಲ್ಪಸೂತ್ರʼದ ರಚನೆಕಾರ – ಭದ್ರಬಾಹು.
•
ಪಾರ್ಶ್ವನಾಥ
ಪರಮ ಜ್ಞಾನ ಪಡೆದುಕೊಂಡ ವಯಸ್ಸು – 30ನೇ ವಯಸ್ಸು.
•
ಪಾರ್ಶ್ವನಾಥರ
ತಂದೆ – ಕಾಶಿಯ ರಾಜನಾದ ಅಶ್ವಸೇನ.
•
ಪಾರ್ಶ್ವನಾಥರ
ನಾಲ್ಕು ತತ್ವಗಳು – ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ಸಂಪತ್ತಿನ ವ್ಯಾಮೋಹ
ತ್ಯಜಿಸುವುದು).
•
ವರ್ಧಮಾನ
ಮಹಾವೀರನ ಜನನ – ಕ್ರಿ.ಪೂ 599.
•
ಮಹಾವೀರನ
ಮೊದಲ ಹೆಸರು – ವರ್ಧಮಾನ.
•
ಮಹಾವೀರನ
ಜನ್ಮಸ್ಥಳ – ಕುಂಡಲೀಪುರ / ಕುಂದಗ್ರಾಮ / ಕುಂಡಲವನ.
•
ಮಹಾವೀರನ
ತಂದೆ – ಸಿದ್ಧಾರ್ಥ.
•
ಮಹಾವೀರನ
ತಾಯಿ – ತ್ರಿಶಲಾದೇವಿ.
•
ಮಹಾವೀರನ
ಪತ್ನಿ – ಯಶೋಧಾ.
•
ಮಹಾವೀರನ
ಸಹೋದರ – ನಂದಿವರ್ಧನ.
•
ಮಹಾವೀರನ
ರಾಜವಂಶದ ಹೆಸರು – ಇಕ್ಷ್ವಾಕು.
•
ಮಹಾವೀರ
ಮಹಾ ಪರಿತ್ಯಾಗ ಮಾಡಿದ ವರ್ಷ – 30ನೇ ವಯಸ್ಸು.
•
ಮಹಾವೀರನ
ಪ್ರಮುಖ ತತ್ವಗಳು – ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ.
•
ಜೈನ
ಧರ್ಮದ ತ್ರಿರತ್ನಗಳು – ಉತ್ತಮ ನಂಬಿಕೆ, ಉತ್ತಮ ಜ್ಞಾನ, ಉತ್ತಮ ನಡತೆ / ಕಾರ್ಯ.
•
ಕ್ರಿ.ಪೂ
6ನೇ ಶತಮಾನದಲ್ಲಿ ಗಣರಾಜ್ಯ ರೂಪದ ಸರ್ಕಾರ ಹೊಂದಿದ್ದ ʼಲಿಚ್ಛವಿʼ - ಈಗಿನ ಬಿಹಾರ.
•
ವೈದಿಕ
ಧರ್ಮದ ವಿರುದ್ಧ ಪ್ರತಿಭಟನೆ ಮಾಡಿದ ಮೊದಲ ಧರ್ಮ – ಜೈನಧರ್ಮ.
•
ಮಹಾವೀರನ
ಮಗಳ ಹೆಸರು – ಅನೋಜ್ಯ (ಪ್ರಿಯದರ್ಶಿನಿ)
•
ರಿಜುಕುಲ
ಎಂಬ ಉಪನದಿಯ ದಂಡೆಯ ಜೃಂಭಕ ಎಂಬ ಗ್ರಾಮದಲ್ಲಿ 12 ವರ್ಷ ತಪಸ್ಸನ್ನು ಆಚರಿಸಿದವನು – ಮಹಾವೀರ.
•
ಮಹಾವೀರನ
ಪ್ರಥಮ ಶಿಷ್ಯ (ಗಣಧರ) – ಇಂದ್ರಭೂತಿ.
•
ಜೈನ
ಪವಿತ್ರ ಗ್ರಂಥಗಳು ಇರುವ ಭಾಷೆ – ಪ್ರಾಕೃತ.
•
ಅಹಿಂಸೆಯೇ
ಪರಮ ಧರ್ಮ ಎಂದು ಹೇಳಿದವರು – ಮಹಾವೀರ.
•
ವಸ್ತ್ರ
ಧರಿಸದ ಜೈನ ಸನ್ಯಾಸಿಗಳು – ದಿಗಂಬರರು.
•
ಬಿಳಿಯ
ವಸ್ತ್ರ ಧರಿಸುವ ಜೈನ ಸನ್ಯಾಸಿಗಳು – ಶ್ವೇತಾಂಬರರು.
•
ಶ್ವೇತಾಂಬರರು
– ಪಾರ್ಶ್ವನಾಥನ ಅನುಯಾಯಿಗಳು – ಬಿಳಿಯ ವಸ್ತ್ರಧಾರಿಗಳು.
•
ದಿಗಂಬರರು
– ಮಹಾವೀರನ ಅನುಯಾಯಿಗಳು – ನಿರ್ವಸ್ತ್ರಧಾರಿಗಳು.
•
ಜೈನರ
ಪವಿತ್ರ ಗ್ರಂಥ – ಆಗಮ ಸಿದ್ಧಾಂತ.
•
ಮನುಷ್ಯ
ಪ್ರಾಣಿ, ಸಸ್ಯ, ಭೂಮಿ, ಜಲಗಳಿಗೂ ಜೀವಿವಿದೆ ಎಂದು ವಾದಿಸಿದವರು – ಮಹಾವೀರ.
•
ಕರ್ನಾಟಕದಲ್ಲಿರುವ
ಪ್ರಾಚೀನ ಜೈನ ಕೇಂದ್ರಗಳು – ಕೊಪ್ಪಳ, ಶ್ರವಣಬೆಳಗೊಳ, ಬೆಳಗಾವಿ, ಕಂಬದಹಳ್ಳಿ, ಮೂಡಬಿದರೆ.
•
ಶ್ರವಣಬೆಳಗೊಳದಲ್ಲಿ
ನೆಲೆಸಿ ಜೈನ ಧರ್ಮದ ಪ್ರಚಾರ ಮಾಡಿದವರು – ಭದ್ರಬಾಹು.
•
ಜೈನ
ದೇವಾಲಯಗಳು – ಬಸದಿ.
•
ಜೈನ
ಧರ್ಮದ ಅನುಯಾಯಿಗಳು ಹೆಚ್ಚಾಗಿರುವ ರಾಜ್ಯಗಳು – ಗುಜರಾತ್, ರಾಜಸ್ಥಾನ.
•
ರಾಜಸ್ಥಾನದ
ಮೌಂಟ್ ಅಬು ಹಾಗೂ ಬಿಹಾರದ ಪಾವಾಪುರಿಯಲ್ಲಿರುವ ದೇವಾಲಯಗಳು – ಶ್ವೇತಾಂಬರರು.
•
ಮಹಾವೀರನು
ತನ್ನ 43ನೇ ವಯಸ್ಸಿನಲ್ಲಿ ಕೈವಲ್ಯ ಜ್ಞಾನ ಹೊಂದಿದ ಸ್ಥಳ – ಋಜುಪಾಲಿಕಾ ನದಿ ದಡ, ಜೃಂಬಿಕ ಗ್ರಾಮ.
•
ಮಹಾವೀರನು
ನಿರ್ವಾಣ ಹೊಂದಿದ ವರ್ಷ – ಕ್ರಿ.ಪೂ 527.
•
ಮಹಾವೀರನು
ತನ್ನ 72ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದ ಸ್ಥಳ – ಪಾವಾಪುರಿ..
•
ಮಗಧದ
ಬಿಂಬಸಾರ, ಆವಂತಿಯ ಪ್ರದ್ಯೋತ, ಚಂಪಾದ ವೇದಿವರ್ಧನ ರಾಜರು ಪ್ರೋತ್ಸಾಹಿಸಿದ ಧರ್ಮ – ಜೈನ.
•
ಜೈನ
ಧರ್ಮದ 5 ಮಹಾ ತತ್ವಗಳು – ಅಹಿಂಸಾ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ.
•
ಚಂದ್ರಗುಪ್ತ
ಮೌರ್ಯನು ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ – ಶ್ರವಣಬೆಳಗೊಳ.
•
ಕನ್ನಡದ
ಕವಿಗಳಾದ ಪಂಪ, ರನ್ನ ಹಾಗೂ ರತ್ನಾಕರವರ್ಣಿ ಇವರ ಧರ್ಮ – ಜೈನ.
•
ಮಹಾವೀರನ
ಅನುಯಾಯಿ ಸನ್ಯಾಸಿನಿಯರ ಮುಖ್ಯಸ್ಥರು – ಕಂಡನಳ.
•
ಜೈನಸಂಘದ
ವಿಭಜನೆಗೆ ಕಾರಣರು – ಜಮಾಲಿ (ಮಹಾವೀರನ ಹಿರಿಯ ಸೋದರಿಯ ಮಗ).
•
ಮಹಾವೀರನ
ಹನ್ನೊಂದು ಜನರನ್ನೊಳಗೊಂಡ ನಿಷ್ಠ ಅನುಯಾಯಿಗಳು – ಗಣಧರರು.
•
ಚಂದ್ರಗುಪ್ತ
ಮೌರ್ಯನ ಕಾಲದಲ್ಲಿದ್ದ ಜೈನ ಸಂಘದ ಮುಖ್ಯಸ್ಥ – ಸ್ಥೂಲಭದ್ರ.
•
ದಕ್ಷಿಣ
ಭಾರತದಲ್ಲಿ ಜೈನ ಧರ್ಮದ ಪ್ರಸಾರಕ್ಕೆ ಕಾರಣರಾದವರು – ಭದ್ರಬಾಹು.
•
ಮೊದಲ
ಜೈನ ಮಹಾಸಭೆ – ಕಾಲ – ಕ್ರಿ.ಪೂ 300, ಅಧ್ಯಕ್ಷತೆ – ಸ್ಥೂಲಭದ್ರ, ಸ್ಥಳ – ಪಾಟಲೀಪುತ್ರ.
•
ಮೊದಲ
ಜೈನ ಮಹಾಸಭೆ – ಉದ್ದೇಶ – ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ, ಜ್ಞಾನವನ್ನು ಪುನರುಜ್ಜೀವನಗೊಳಿಸುವುದು.
•
ಎರಡನೇ
ಜೈನ ಮಹಾಸಭೆ – ಕಾಲ – ಕ್ರಿ.ಶ. 512, ಸ್ಥಳ – ಗುಜರಾತ್ ನ ವಲ್ಲಭಿ.
•
ಎರಡನೇ
ಜೈನ ಮಹಾಸಭೆ – ಉದ್ದೇಶ – ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ಬರೆಯಲಾಯಿತು.
•
ಜೈನ
ಧರ್ಮದ ಪುರಾತನ ಸಿದ್ಧಾಂತಗಳ ಕುರಿತು ಕೃತಿ ರಚಿಸಿದವರು – ಅಕಳಂಕ.
•
ಐಹೊಳೆ
ಶಾಸನ ರಚಿಸಿದ ಎರಡನೇ ಪುಲಿಕೇಶಿಯ ದಂಡನಾಯಕ – ರವಿಕೀರ್ತಿ.
•
ಶ್ರವಣಬೆಳಗೊಳದ
ಬಾಹುಬಲಿಯ 58 ಅಡಿಯ ಬೃಹತ್ ಶಿಲಾವಿಗ್ರಹವನ್ನು ಕೆತ್ತಿಸಿದವರು – ಚಾವುಂಡರಾಯ.
0 Comments