ವಿಶ್ವಕರ್ಮ ಜಯಂತಿ

ವಿಶ್ವಕರ್ಮ ಜಯಂತಿ.

"ಆಡು ಮುಟ್ಟದ ಸೊಪ್ಪಿಲ್ಲ,
ವಿಶ್ವಕರ್ಮರು ಆವರಿಸದ ಕ್ಷೇತ್ರವಿಲ್ಲ,
ಅವರ ಪಾತ್ರವಿಲ್ಲದ ಕ್ಷೇತ್ರಗಳಿಲ್ಲ, ಜಾತ್ರೆಗಳಿಲ್ಲ."

ಸೃಷ್ಟಿಕತ೯ ಬ್ರಹ್ಮನಾದರೆ,
ಅವನ ವಂಶಸ್ಥನಾದ ವಿಶ್ವಕರ್ಮನು
ಇಡೀ ಸೃಷ್ಟಿಯ
ಕರಡು ಪ್ರತಿಯ ಪಿತಾಮಹ,
ಸೃಷ್ಟಿಯ ನೀಲನಕ್ಷೆ ತಯಾರಕ.
(Draftsman of the whole Universe).

ಇಂದು ನಾವೆಲ್ಲರೂ ಒಂದು ಅತ್ಯದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾಯ೯ತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೇರೆ ಇನ್ನೇನಿಲ್ಲ.

ವಿಶ್ವಕಮ೯ ಎಂದರೆ ಸ್ವಗ೯ದ ಶಿಲ್ಪಿ. ಸಮುದ್ರಮಥನ ಕಾಲದಲ್ಲಿ ಹುಟ್ಟಿದ ಕಾಮಧೇನು, ಕಲ್ಪವೃಕ್ಷಗಳ ಹಾಗೆ 14 ಅತ್ಯಮೂಲ್ಯ ರತ್ನಗಳಲ್ಲಿ ವಿಶ್ವಕಮ೯ರೂ
ಒಬ್ಬರು.

"ವಿಶ್ವಕರ್ಮ ಎಂಬುವರು ವ್ಯಕ್ತಿಯಲ್ಲ ಅದೊಂದು ಅದ್ಭುತ, ಅದ್ವಿತೀಯ ದೈವ ಶಕ್ತಿ." ಎಂಬುದನ್ನು ಮರೆಯಬಾರದು

*ಋಗ್ವೇದದ ಪ್ರಕಾರ:

"ವಿಶ್ವಕರ್ಮರು ಇಡೀ ವಿಶ್ವದ ವಾಸ್ತುಶಿಲ್ಪಿ"
(Principal architecture of the universe,  Devine engineer of the world.)

*ಮಹಾಭಾರತದ ಪ್ರಕಾರ:

"ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಲಾದೇವತೆಯೇ ವಿಶ್ವಕಮ೯"
(The Lord of the arts,executor of a thousand handicrafts, the carpenter of the God's, the most eminent of artisans, the fashioner of all ornaments and a great & immortal god.)

ವಿಶ್ವಕಮ೯ರ ಕಾಯಕಯೋಗ:

*ದೇವಾನುದೇವತೆಗಳಿಗೆ ಸುಂದರ ಅರಮನೆಗಳನ್ನು ನಿಮಿ೯ಸಿಕೊಟ್ಟ ಕೀತಿ೯.

*ಪಂಚಮವೇದ ಎಂದೇ ಕರೆಯಲ್ಪಡುವ
'ಸ್ಥಪತ್ಯವೇದ'ವನ್ನು ನೀಡಿದ ಮಹಾ ಮೇಧಾವಿ.
ಸ್ಥಪತ್ಯವೇದವು ಯಂತ್ರಶಾಸ್ತ್ರ ಹಾಗೂ ಶಿಲ್ಪಶಾಸ್ತ್ರದ ವಿಜ್ಞಾನವಾಗಿದೆ.
(The science of mechanics and architecture)

*ದೇವಾನುದೇವತೆಗಳ ಹಾರುವ ರಥಗಳ ವಿನ್ಯಾಸಕಾರ.

*ದೇವಾನುದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ & ಪಟ್ಟಣಗಳನ್ನು ನಿಮಿ೯ಸಿದ ಕೀತಿ೯ ಇವರಿಗಿದೆ.
ಸತ್ಯಯುಗದಲ್ಲಿ-ಸ್ವಗ೯ದ ನಿಮಾ೯ಣ
ತ್ರೇತಾಯುಗದಲ್ಲಿ-ಲಂಕಾ ಪಟ್ಟಣ
ದ್ವಾಪರಯುಗದಲ್ಲಿ-ಶ್ರೀಕೃಷ್ಣನ ರಾಜಧಾನಿಯಾದ ದ್ವಾರಕಾ ಪಟ್ಟಣ ನಿಮಾ೯ಣ ಮಾಡಿದರು.

ಕೌರವರಿಗೆ ಹಸ್ತಿನಾಪುರ & ಪಾಂಡವರಿಗೆ ಇಂದ್ರಪ್ರಸ್ಥ ಎಂಬ ಸುಂದರ ನಗರಗಳ ನಿಮಾ೯ಣದ ಕೀತಿ೯ಯು ಇವರಿಗೆ ಸಲ್ಲುತ್ತದೆ.

ದೃಷ್ಟಾಂತ:

ವಿಶ್ವಕಮ೯ರ ಕಾಯ೯ದ ನೈಪುಣ್ಯತೆ ಹಾಗೂ ಕೌಶಲದ ಚಾಕಚಕ್ಯತೆ ಹೇಗಿದೆ ಎಂಬುದನ್ನು ಈ ದೃಷ್ಟಾಂತದ ಮೂಲಕ ತಿಳಿಯಬಹುದು.

ರಾಮಾಯಣದ ಪ್ರಕಾರ ಹೇಳುವಂತೆ
ತ್ರೇತಾಯುಗದಲ್ಲಿ ಶಿವನು ಪಾವ೯ತಿಯನ್ನು ಮದುವೆಯಾದ ಸಂದಭ೯ದಲ್ಲಿ, ಶಿವನು ತನ್ನ ಮಡದಿಯಾದ ಪಾವ೯ತಿಗಾಗಿ ಬಂಗಾರದ ಅರಮನೆಯನ್ನು ಉಡುಗೊರೆಯಾಗಿ ನೀಡಬೇಕೆಂದು ನಿಧ೯ರಿಸಿ,
ಬಂಗಾರದ ಅರಮನೆಯನ್ನು ನಿಮಿ೯ಸಿಕೊಡಬೇಕೆಂದು ವಿಶ್ವಕರ್ಮರಲ್ಲಿ ವಿನಂತಿಸಿದಾಗ ವಿಶ್ವಕರ್ಮರು ಅತ್ಯಂತ  ವಿಧೇಯರಾಗಿ ಒಪ್ಪುತ್ತಾರೆ.

ಶಿವನು ಬಂಗಾರದ ಅರಮನೆಯ ನಿಮಾ೯ಣಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ನೀಡುತ್ತಾನೆ.

ಕೆಲವು ದಿನಗಳ ನಂತರ ವಿಶ್ವಕರ್ಮರು ಅತ್ಯಂತ ಸುಂದರ & ಭವ್ಯವಾದ ಸುವಣ೯ಸೌಧ (ಬಂಗಾರದ ಅರಮನೆ)ವನ್ನು ನಿಮಿ೯ಸುತ್ತಾರೆ.

ಈ ಭವ್ಯ ಅರಮನೆಯ ಗೃಹಪ್ರವೇಶಕ್ಕೆ
(House opening ceremony) ಶಿವನು ತನ್ನ ಗುರುಗಳಾದ
'ಪುಲಸ್ಯ ಮಹಷಿ೯'ಗಳನ್ನು ಆಹ್ವಾನಿಸುತ್ತಾನೆ
(ಪುಲಸ್ಯ ಮಹಷಿ೯ಗಳು ಕುಬೇರ & ರಾವಣರ ಅಜ್ಜ).

ಪುಲಸ್ಯ ಮಹಷಿ೯ಗಳು ಗೃಹಪ್ರವೇಶ ಕಾಯ೯(ಕ್ರಮ)ವನ್ನು ಪೂತಿ೯ಗೊಳಿಸಿದ ನಂತರ ಶಿವನು,
ತನ್ನ ಗುರುಗಳು ಗುರುಕಾಣಿಕೆಯಾಗಿ ಏನನ್ನಾದರೂ ಸ್ವೀಕರಿಸಬೇಕೆಂದು ಕೇಳಿಕೊಂಡಾಗ, ಗುರುಗಳಾದ ಪುಲಸ್ಯ ಮಹಷಿ೯ಗಳು ಆಗಲೇ ಆ ಅರಮನೆಯ ಸೌಂದರ್ಯಕ್ಕೆ, ಕಲಾಕೃತಿಗಳ ಸೂಕ್ಷ್ಮ ಕೆತ್ತನೆಗೆ ಮನಸೋತಿದ್ದರು. ಆ ಬಂಗಾರದ ಅರಮನೆಯು ಮಹಷಿ೯ಗಳ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ,
ಗುರುಗಳು ಯಾವ ಅರಮನೆಯ ಗೃಹಪ್ರವೇಶವನ್ನು ಮಾಡಿದ್ದರೋ ಅದೇ ಅರಮನೆಯನ್ನು ಗುರುಕಾಣಿಕೆಯಾಗಿ ಕೇಳುತ್ತಾರೆ!!.

ಆಗ ಶಿವನಿಗೆ ಆಶ್ಚರ್ಯದ ಜೊತೆಗೆ ವಿಶ್ವಕಮ೯ರ ಕಾಯ೯ಕೌಶಲ್ಯದ ಬಗ್ಗೆ ಹೆಮ್ಮೆ ಎನಿಸಿತು.

ಶಿವನು ತನ್ನ ಗುರುಗಳಿಗೆ ಅತ್ಯಂತ ವಿಧೇಯನಾಗಿ ಆ ಭವ್ಯ ಬಂಗಾರದ ಅರಮನೆಯನ್ನು ಗುರುಕಾಣಿಕೆಯಾಗಿ ನೀಡುತ್ತಾನೆ.

ಪುಲಸ್ಯ ಮಹಷಿ೯ಗಳು ಈ ಅರಮನೆಯನ್ನು ತನ್ನ ಪ್ರೀತಿಯ ಮೊಮ್ಮಗನಾದ ಕುಬೇರನಿಗೆ ಉಡುಗೊರೆಯಾಗಿ ನೀಡುತ್ತಾರೆ.

ಕಾಲಕ್ರಮೇಣ ರಾವಣನು ಕುಬೇರನನ್ನು ಸೋಲಿಸಿದಾಗ ಈ ಅರಮನೆಯು ರಾವಣನ ಕೈವಶವಾಗುತ್ತದೆ.
ಸುವಣ೯ಲಂಕೆಯು ಕಾಲಾನಂತರದಲ್ಲಿ ಶ್ರೀಲಂಕೆ ಎಂದಾಯಿತು.

ವಿಶ್ವಕರ್ಮರ 5 ಜನ ಮಕ್ಕಳು ಒಂದೊಂದು ವೃತ್ತಿಯನ್ನು ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಆ ಪಂಚಕಮ೯ರು ಯಾರೆಂದರೆ:

1.ಮನು - ಕಮ್ಮಾರ(Blacksmith)

2.ಮಾಯಾ - ಬಡಿಗ(Carpenter)

3.ತ್ವಸ್ತರ - ಕಂಚಗಾರ(Bellmetal worker)

4.ಶಿಲ್ಪಿ - ಶಿಲ್ಪಕಾರ(Stone Masons)

5.ವಿಶ್ವಜ್ಞ- ಅಕ್ಕಸಾಲಿಗ/ಪತ್ತಾರ(Goldsmith).

ಪಂಚಕಮ೯ರನ್ನು ಪಂಚ್ಯಾಳರು ಎಂದು, ಇವರನ್ನು ವಿಶ್ವಕರ್ಮದವರೆಂದು ಹಾಗೂ ವಿಶ್ವಬ್ರಾಹ್ಮಣರೆಂದೂ ಕರೆಯಲಾಯಿತು.

ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಥಳಗಳು ಸೇರಿದಂತೆ ಭಾರತದ ಅಜಂತಾ,ಎಲ್ಲೋರಾ,ಖಜುರಾಹೋ,ಲಂಕಾ, ದ್ವಾರಕಾ, ನಳಂದಾ, ದೆಹಲಿಯ ಕುತುಬ್ ಮಿನಾರ, ಕೋನಾಕ೯ನ ಸೂಯ೯ದೇವಾಲಯ,
ಕನಾ೯ಟಕದ ಐಹೊಳೆ, ಹಂಪಿ, ಬದಾಮಿ, ಪಟ್ಟದಕಲ್ಲುಗಳಲ್ಲಿರುವ ಪ್ರವಾಸಿ ತಾಣಗಳು ವಿಶ್ವಕರ್ಮರ ಬೃಹತ್ ಕೊಡುಗೆಗಳಾಗಿವೆ.

ಇಂದು ಪ್ರತಿ ಗ್ರಾಮದ ಪ್ರತಿಯೊಂದು ಕಾಯ೯ಕ್ಕೂ ವಿಶ್ವಕಮ೯ರ ಅಗತ್ಯವಿದೆ.
ಆದ್ದರಿಂದ ಜಾತಿ, ಧಮ೯, ಪಂಗಡಗಳಿಗೆ ಅವರನ್ನು ಸೀಮಿತಗೊಳಿಸದೇ
ಸವ೯ರೂ ಅವರನ್ನು ಆರಾಧಿಸೋಣ, ಪೂಜಿಸೋಣ ಹಾಗೂ ಗೌರವಿಸೋಣ.

Post a Comment

0 Comments